ಕೆ. ಸುಚೇಂದ್ರ ಪ್ರಸಾದ್ (ಜನನ ೧೯೭೩) ಅವರು ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟ. ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ನಾಟಕಕಾರರಾದ ಬಿ. ವಿ. ಕಾರಂತ್ ಮತ್ತು ಡಿ. ಆರ್. ಅಂಕುರ್ ಅವರೊಂದಿಗೆ ನಾಟಕಗಳಲ್ಲಿ ನಟರಾಗಿ ಕೆಲಸ ಮಾಡಿದ್ದರು. ಈ ಸಮಯದಲ್ಲಿ, ಅವರು ಚಲನಚಿತ್ರಗಳು, ದೂರದರ್ಶನ ಮತ್ತು ರೇಡಿಯೊಗಳಿಗೆ ಸಂಗೀತ ನಿರ್ದೇಶನ, ನೃತ್ಯ ಸಂಯೋಜನೆ, ಸಂಗೀತ ಸಂಯೋಜನೆ ಮತ್ತು ನಾಟಕಗಳನ್ನು ಬರೆಯುತ್ತಿದ್ದರು. ಸಮಾನಾಂತರ ಸಿನೆಮಾದಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಅವರು, ೧೯೯೯ ರ ಚಲನಚಿತ್ರ ಕಾನೂರು ಹೆಗ್ಗಡತಿಯಲ್ಲಿನ ಅವರ ಅಭಿನಯಕ್ಕಾಗಿ ಮೊದಲ ಬಾರಿಗೆ ಮಾನ್ಯತೆ ಪಡೆದರು. ಅವರು ಯುಎನ್‌ಡಿಪಿ ಯೊಂದಿಗೆ ವಿವಿಧ ಎನ್‌ಜಿಒಗಳಲ್ಲಿ ಕೆಲಸ ಮಾಡುತ್ತಾರೆ. == ಚಲನಚಿತ್ರಗಳು == == ಉಲ್ಲೇಖಗಳು ==